ಜಗವ ತೋರುವ ಕಣ್ಣು

ಜೊತೆಜೊತೆಯಲಿ
ಕೈಯಲ್ಲಿ ಕೈಯಿಟ್ಟು ನಡೆವ
ಅವರನ್ನೂ ಕಂಡಾಗಲೆಲ್ಲಾ,
ಮುಂದೊಂದು ದಿನ ನಾನು ಹೀಗೆ,
ಬರಿಯ ಹಾಗೇ ಅಂದುಕೊಂಡಿದ್ದೆ, ಅಷ್ಟೇ.

ಪೇಟೆ ದಾರಿಯಲ್ಲಿ
ಹೀಗೆ ಕೈ ಕೈ ಹಿಡಿದು
ನಡೆದಾಡಿರಲೇ ಇಲ್ಲ ನಾವೆಂದೂ.
ಹಾಗೆ ಇರಲಾಗಲೇ ಇಲ್ಲ
ಎಂದುಕೊಳ್ಳುತ್ತಿರುವಾಗಲೇ,
ಆಕಸ್ಮಿಕವಾಗಿ ಆತ ಎದುರಾದದ್ದು.
ಕೊಂಚ ಗಲಿಬಿಲಿ ಮುಖದಲ್ಲೇ ನಕ್ಕು
ಹಲ್ಲು ಗಿಂಜಿದ.
ನನ್ನ ಮುಖದಲ್ಲೊಂದು ವಿಜಯದ ನಗೆ.

ಬಿಚ್ಚಿಕೊಳ್ಳಲು ಏನಿಲ್ಲ
ಗಿಡದ ಕೊರಳಲ್ಲಿ ಮೂಡಿದ ಏಕಾಂಗಿದನಿ
ಜಗದ ದನಿಯಾಗಿ ಮೂಡಿದ್ದಾಗಿದೆ.
ಹೆರಳಿಗೆ ಮುಡಿಸಿದ ಮಾಲೆ
ಕಿತ್ತೆಸೆದು ವರ್ಷಗಳಾಗಿವೆ.
ನಾಭಿಯಲ್ಲುದಿಸಿದ ನಾದ
ಅಶ್ರುತ ಗಾನವಾಗಿ
ಕರ್ಣಕ್ಕೊಲಿಯದೆ ಕರ್ಕಶವಾಗ ಲಾಗಾಯ್ತು.
ಬರಿಯ ದಾಸರ ಪದಗಳೇ
ಉಸಿರಾಗಿ ಕಳೆದಾಯ್ತು.

ಎಲ್ಲ ಹೆಣ್ಣು ಅಹಲ್ಯೆ ಎಂದೇ ಪರಿಭಾವಿಸಿ
ಅನರ್ಥಗೈಯುವ ಇಂದ್ರರಿರುವರು ಜಾಣೆ
ಸೀತೆಯಂತಿರಬೇಕು ನೀನು
ಎಂದಾಗಲೆಲ್ಲಾ ನಾನೆನ್ನುತ್ತಿದ್ದೆ
‘ನೀನು ರಾಮನಾದರೆ’
ಅಷ್ಟೇ ಪಲ್ಲಟಿಸಿಬಿಟ್ಟಿತು ಬದುಕು.
ಪರಿಪರಿಯಾದ
ಯಾವ ಪ್ರಲಾಪವೂ ಪ್ರಕೋಪವೂ ಇಲ್ಲದೇ.

ಈಗ ಪೇಟೆದಾರಿಯಲ್ಲಿ
ಕೈ ಕೈ ಹಿಡಿದು ನುಲಿವ
ಅವರು ಗೋಚರಿಸುವುದಿಲ್ಲ.
ಅದಕ್ಕೆಂದೆ ಗುತ್ತು ಬದಲಿಸಿ ಬೆಟ್ಟದ
ನೆತ್ತಿಯ ಮೇಲೆ ಕೂತೆ.
ಕನಸ ಕವನ ನೆಲನೆಲ್ಲಿಯ ಬಾಯಿಗಿಟ್ಟಿತು
ಸೋಂಕಿನ ಶೀತಕ್ಕೆ ರಾಮಬಾಣ
ಮನೆ ಕಿಬಳಿಯ ಬದಿಯಲ್ಲೆ
ಹುಟ್ಟಿದ ಇದಕ್ಕೆ ಅದೆಂಥಾ
ಇಸ್ರೂಪದ ಹೆಸರು- ನೆಲನೆಲ್ಲಿ
ಪೇಟೆದಾರಿಯಲ್ಲಿ ಸಿಗದ ಇದನ್ನು
ಹಿತ್ತಲು ಹುಡುಕಿಯೇ ತೆಗೆದದ್ದು
ಒಂದಿಷ್ಟು ನೀರು ಸೇರಿಸಿ ಕುದಿಸಿ ರಸ
ಬಸಿದು ಕುಡಿದಷ್ಟು ರಸವುಕ್ಕಿಸಿ
ಜಗವ ತೋರುವ ಕಣ್ಣಾದದ್ದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೬
Next post ಮುಸ್ಸಂಜೆಯ ಮಿಂಚು – ೨೩

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys